Friday, April 29, 2011

HEALTH BENEFITS OF GINGER ಶುಂಠಿ





ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿ. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್ ನ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ.

ತುಳಸಿ, ಶುಂಠಿ, ಕೊತ್ತಂಬರಿ ಬೀಜ ಇವು ಕಷಾಯಕ್ಕೆ ಖಾಯಂ ಪದಾರ್ಥಗಳು. ಅಡುಗೆಗೆ ಬಳಕೆಯಾಗುವುದಕ್ಕಿಂತ ಆರೋಗ್ಯ ವರ್ಧನೆಗೂ ಶುಂಠಿ ಹೆಚ್ಚು ಸಹಕಾರಿ ಎನ್ನಲಡ್ಡಿಯಿಲ್ಲ. ಶಾಲೆಯಲ್ಲಿ ಮಾತ್ರ ಮೇಷ್ಟ್ರು ಒಣ ಶುಂಠಿ ಕೊಡ್ಲಾ ಎಂದರೆ ನಡುಕ ಹುಟ್ಟಿಬಿಡುತ್ತಿತ್ತು.

ಪ್ರಪಂಚದೆಲ್ಲೆಡೆ ಸಿಗುವ ಅತ್ಯುತ್ತಮ ಔಷಧಿ ಎಂಬ ಕಾರಣಕ್ಕೆ ಇದನ್ನು 'ಮಹೌಷಧಿ', 'ವಿಷ್ವಬೇಷಜ' ಎಂದು ಕರೆಯುತ್ತಾರೆ. ಜಠರದ ತೊಂದರೆ ನಿವಾರಣೆಗೆ, ಅಜೀರ್ಣ, ವಾಯು, ವಾಕರಿಕೆ, ಮಲಬದ್ಧತೆ, ಹೊಟ್ಟೆಯ ಸೋಂಕು ನಿವಾರಣೆಗೆ ಸಹಕಾರಿ. ಕೊಲೆಸ್ಟ್ರಾಲ್ ಕಮ್ಮಿ ಮಾಡುವುದರಿಂದ ಹೃದಯ ಸಂಬಂಧಿ ರೋಗದಿಂದ ಬಳಲುವವರಿಗೆ ಸಹಕಾರಿ.

ಶುಂಠಿಯ ಸಾಮಾನ್ಯ ಉಪಯೋಗಗಳು:

* ಅರ್ಧ ಟೀ ಚಮಚ ಶುಂಠಿ ರಸ, 1 ಟೀ ಚಮಚ ನಿಂಬೆರಸ, ಅಷ್ಟೇ ಪುದೀನ ಎಲೆಯ ರಸ, 1 ಟೀ ಚಮಚ ಜೇನುತುಪ್ಪ ಸೇರಿಸಿ 3 ಭಾಗ ಮಾಡಿ ದಿನಕ್ಕೆ 3 ಬಾರಿ ಸೇವಿಸಲು ಶ್ವಾಸರೋಗ, ಸ್ವರ ಭೇದ, ಅಜೀರ್ಣ, ಕೆಮ್ಮು ರೋಗಗಳನ್ನು ನಿವಾರಿಸಬಹುದು.

* 1 ಸಣ್ಣ ತುಂಡು ಹಸಿ ಶುಂಠಿಯನ್ನು 1 ಬಟ್ಟಲು ನೀರಿನಲ್ಲಿ 15 ನಿಮಿಷ ಕುದಿಸಿ, ಸ್ವಲ್ಪ ಸಕ್ಕರೆ ಹಾಕಿ ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡಿದರೆ ಋತುಸ್ರಾವದ ತೊಂದರೆಗಳು ನಿವಾರಣೆಯಾಗುತ್ತದೆ.

*1 ತುಂಡು ಶುಂಠಿ, 1 ಲವಂಗ, 1 ಹರಳು ಉಪ್ಪು ಇವುಗಳನ್ನು ಬಾಯಿಯಲ್ಲಿಟ್ಟು ಚಪ್ಪರಿಸುವುದರಿಂದ ಕೆಮ್ಮು, ಗಂಟಲು ಕೆರೆತಗಳನ್ನು ಹೋಗಲಾಡಿಸಬಹುದು.

* ಶುಂಠಿಯನ್ನು ನೀರಿನಲ್ಲಿ ಅರೆದು ಬರುವ ಗಂಧವನ್ನು ಹಣೆಗೆ ಲೇಪ ಮಾಡಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

* ಒಣ ಶುಂಠಿ ಚೂರ್ಣವನ್ನು ಬೆಲ್ಲದೊಂದಿಗೆ ನೀಡುವುದರಿಂದ ಅಜೀರ್ಣದಿಂದ ಉಂಟಾದ ಭೇದಿ ಹತೋಟಿಗೆ ಬರುತ್ತದೆ.

* ಒಣ ಶುಂಠಿ, ಮೆಣಸು ಮತ್ತು ಹಿಪ್ಪಲಿಗಳನ್ನು ಸಮನಾಗಿ ತೆಗೆದುಕೊಂಡು, ಹುರಿದು , ಪುಡಿ ಮಾಡಿಕೊಂಡು ತೆಳು ಬಟ್ಟೆಯಲ್ಲಿ ಸೋಸಿ, ಬೆಣ್ಣೆಯೊಡನೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.


*ಶುಂಠಿಯನ್ನು ಜಜ್ಜಿ ರಸ ತೆಗೆದು,  ಒಂದು ಚಮಚ ತಾಜಾ ರಸಕ್ಕೆ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರುಸಲ ಸೇವಿಸಿದರೆ ಕೆಮ್ಮು ಪರಿಹಾರವಾಗುತ್ತದೆ.

* ಒಂದು ಚಮಚ ಹಸಿ ಶುಂಠಿ ರಸಕ್ಕೆ ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಉಪ್ಪು ಬೆರೆಸಿ ಊಟದ ನಂತರ ಸೇವಿಸಿದರೆ ಅಜೀರ್ಣಕ್ಕೆ ಒಳ್ಳೆಯದು.

* ಬಾಯಿ ರುಚಿ ಕೆಟ್ಟಾಗ, ಹೊಟ್ಟೆ ಉಬ್ಬರಿಸಿದಾಗ, ಶುಂಠಿ ಪುಡಿಗೆ ನೆಲ್ಲಿಕಾಯಿ,ಅಳಲೆಕಾಯಿ ನಿಂಬೆರಸ ಬೆರೆಸಿ ಬಿಸಿನೀರಲ್ಲಿ ಸೇವನೆ ಮಾಡಿದರೆ ಒಳ್ಳೆಯದು.

* ಶ್ವಾಸ ಸಂಬಂಧಿ ಖಾಯಿಲೆಗೆ, ಶುಂಠಿಗೆ ಕರಿಮೆಣಸು,ಜೇನುತುಪ್ಪ ಬೆರೆಸಿ ಬಿಸಿನೀರಿನೊಡನೆ ಕುಡಿಯುವುದು ಒಳ್ಳೆಯದು.
ವಾಂತಿ,ವಾಕರಿಕೆಗೆ, ಹಸಿಶುಂಠಿರಸ, ದಾಳಿಂಬೆರಸ, ಸ್ವಲ್ಪ ಜೀರಿಗೆಪುಡಿ ಸೇರಿಸಿ ಬರಿ ಹೊಟ್ಟೆಗೆ ಸೇವಿಸಿ.


* ತಲೆನೋವಿಗೆ, ಶುಂಠಿಯನ್ನು ಹಾಲಿನಲ್ಲಿ ಅರೆದು ಪಟ್ಟು ಹಾಕಿದರೆ ಉಪಶಮನವಾಗುತ್ತದೆ.

* ಅರ್ಧ ಲೋಟ ಬಿಸಿ ನೀರಿಗೆ ಶುಂಠಿ ರಸ, ಬೆಲ್ಲ ಬೆರೆಸಿ ಕಲಸಿ ಬೆಳಗ್ಗೆ ಮತ್ತು ರಾತ್ರಿ ಮೂರು ದಿನಗಳ ಕಾಲ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.

* ಶುಂಠಿ, ಹಿಪ್ಪಲಿ, ಕಾಳು ಮೆಣಸು ಮತ್ತು ತುಳಸಿ ಇವುಗಳನ್ನು ತಲಾ ಐದು ಗ್ರಾಂನಂತೆ ತೆಗೆದುಕೊಮಡು ಪುಡಿ ಮಾಡಿ ಅರ್ಧ ಲೋಟ ನೀರಿಗೆ ಹಾಕಿ ಕುದಿಸಬೇಕು. ಅದು ಅರ್ಧ  ಭಾಗಕ್ಕೆ ಇಳಿದ ಮೇಲೆ ಬೆಲ್ಲ  ಹಾಲು ಬೆರೆಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ನೆಗಡಿ ನಿವಾರಣೆಯಾಗುವುದು.

* ಶುಂಠಿ, ಮೆಣಸಿನ ಕಾಳು, ಹಿಪ್ಪಲಿಗಳನ್ನು ಪುಡಿಮಾಡಿಟ್ಟುಕೊಂಡು ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

 * ಒಂದು ಚಮಚೆ ಹಸಿಶುಂಠಿ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಒಂದರಿಂದ ಎರಡು  ಚಮಚೆಯಷ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವಾಂತಿ ನಿಂತುಹೊಗುತ್ತದೆ.

* ಒಂದು ಸ್ಪೂನ್‌ ಹಸಿ ಶುಂಠಿ ರಸಕ್ಕೆ ಅರ್ಧ ಸ್ಪೂನ್‌ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಕಫ‌, ಉಬ್ಬಸ ಕಡಿಮೆಯಾಗುತ್ತದೆ.

 * ಶುಂಠಿ, ಹುರುಳಿ, ನೆಲಗುಳ್ಳ, ಆಡುಸೋಗೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿ ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರೆ ಉಬ್ಬಸ ರೋಗ ಕಡಿಮೆಯಾಗುತ್ತದೆ.


* ಶುಂಠಿ, ಹಿಪ್ಪಲಿ, ಕಾಳು ಮೆಣಸುಗಳನ್ನು ಪುಡಿ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ಉಬ್ಬಸ ರೋಗ ಉಪಶಮನಕ್ಕೆ ಬರುತ್ತದೆ.

* ವಾಯುವಿನಿಂದ ಕೈಕಾಲುಗಳ ಕೀಲುಗಳಲ್ಲಿ ಬಾವು ಮತ್ತು ನೋವುಗಳು ಇದ್ದರೆ ಅದಕ್ಕೆ ಅಮವಾತ ಅಥವಾ ವಾಯುನೋವು ಎನ್ನುತ್ತಾರೆ. ಇದು ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಉಂಟಾದ ಆಮದೋಷದಿಂದ ಬರುವ ರೋಗ, ಒಳ್ಳೆಯ ಪಚನಕಾರಿಯಾದ ಶುಂಠಿ ಈ ಅಮವಾತ ರೋಗಕ್ಕೆ ಒಂದು ದಿವ್ಯೌಷಧ.ಹಸಿ ಶುಂಠಿಯನ್ನು ತೆಗೆದುಕೊಂಡು ಕುಟ್ಟಿ ರಸವನ್ನು ತೆಗೆದು ಒಂದು ಚಮಚ ರಸಕ್ಕೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತೆಗೆದುಕೊಂಡರೆ ಪಚನಶಕ್ತಿ ಹೆಚ್ಚಾಗಿ ಅಮದೋಷ ನಿವಾರಣೆಯಾಗುತ್ತದೆ. ಇದಲ್ಲದೆ ಶುಂಠಿ ರಸ ಮತ್ತು ಜೇನುತುಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗ ವುಳ್ಳವರು ಜೇನುತುಪ್ಪಕ್ಕೆ ಬದಲಾಗಿ ಸೈಂಧವ ಲವಣ ವನ್ನು ಉಪಯೋಗಿಸಬಹುದು.

* ಒಣಶುಂಠಿ, ಅಮೃತಬಳ್ಳಿ ಮತ್ತು ಜೇಷ್ಠ ಮಧು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ವಿಧಿವತ್ತಾಗ ಕಷಾಯ ಮಾಡಿ. ಅಂದರೆ ಮೇಲೆ ಹೇಳಿ ರುವ ಮೂರು ಔಷಧಿಗಳ ಹದಿನಾರರಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದರಲ್ಲಿ ಕಾಲುಭಾಗ ಉಳಿ ಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದಕ್ಕೆ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬರಿಯ ಹೊಟ್ಟೆಯಲ್ಲಿ ತೆಗೆದುಕೊಂಡು ಪಥ್ಯ ಮಾಡಿದರೆ ಅಮವಾತ ಗುಣವಾಗುತ್ತದೆ. ಇದು ಅಮ ವಾತಕ್ಕೆ ಸುಲಭ ಹಾಗೂ ಪರಿಣಾಮಕಾರಿ ಔಷಧವಾಗಿದೆ.

* ಅಜೀರ್ಣ ಮತ್ತು ಅತಿಸಾರಗಳಲ್ಲಿ: ಅಜೀರ್ಣ ಮತ್ತು ಅಜೀರ್ಣದಿಂದ ಉಂಟಾಗುವ ಅತಿಸಾರದಲ್ಲಿ 250ರಿಂದ 300 ಮಿ.ಗ್ರಾಂ ಒಣ ಶುಂಠಿ ಚೂರ್ಣವನ್ನು ಸಕ್ಕರೆ ಮತ್ತು ತುಪ್ಪ ಬೆರೆಸಿ ತೆಗೆದುಕೊಂಡರೆ ಒಳ್ಳೆಯ ಲಾಭ ಸಿಗುತ್ತದೆ.

* ಶುಂಠಿಯ ಕ್ಷೀರಪಾಕ: ಒಂದು ಚಮಚ ಒಣಶುಂಠಿ ಪುಡಿಗೆ ಒಂದು ಲೋಟ ನೀರು, ಒಂದು ಲೋಟ ಹಾಲು ಕೂಡಿಸಿ ಚೆನ್ನಾಗಿ ಕಾಯಿಸಬೇಕು. ನೀರಿನ ಭಾಗವೆಲ್ಲಾ ಆವಿಯಾಗಿ ಹೋಗಿ ಹಾಲು ಮಾತ್ರ ಉಳಿದಾಗ (ಒಂದು ಲೋಟ ಹಾಲು ಮಾತ್ರ ಉಳಿಯ ಬೇಕು) ಅದನ್ನು ಒಲೆಯ ಮೇಲಿಂದ ತೆಗೆದು ಶೋಧಿಸಿಕೊಂಡು ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪ ವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ತೆಗೆದುಕೊಂಡರೆ ದೇಹದಲ್ಲಿ ಪಚನ ಶಕ್ತಿ ಹೆಚ್ಚಾಗುತ್ತದೆ, ಶೀತ ಕೆಮ್ಮುಗಳು ಬಾಧಿಸುವುದಿಲ್ಲ. ಮಳೆಗಾಲಕ್ಕೆ ಇದು ಒಂದು ಉತ್ತಮ ಪಾನೀಯ. ಕೆಲವರಿಗೆ ಹಾಲು ಕುಡಿದರೆ ಜೀರ್ಣವಾಗುವುದಿಲ್ಲ.ಅಂತಹವರು ಮೇಲೆ ಹೇಳಿರುವ ಕ್ಷೀರ ಪಾಕ ಮಾಡಿ ತೆಗೆದುಕೊಳ್ಳಬಹುದು.

* ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ ೩-೬ ಹನಿ ಹಸಿ ಶುಂಠಿರಸ, ಒಂದು ಚಮಚ ಜೇನುತುಪ್ಪ ಮತ್ತು ೨-೩ ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹುಬೇಗ ಶೀತ ನೆಗಡಿಗಳು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.

* ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ.  ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ. 


* ಶುಂಠಿಯನ್ನು ಪ್ರತಿ ದಿನ ಊಟದಲ್ಲಿ ಸಾಕಷ್ಟು ಬಳಸಿದರೆ, ಅದು ಊಟಕ್ಕೆ ರುಚಿಯನ್ನು ಕೊಡುವುದೇ ಅಲ್ಲದೆ, ಪಚನ ಕ್ರಿಯೆಯನ್ನು ವದ್ಧಿಗೊಳಿಸಿ, ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ, ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.



Health benefit of Ginger:

 •Ginger may be powerful weapon
in the treatment of ovarian cancer. A study conducted at the University of Michigan Comprehensive Cancer Center found that ginger powder
induces cell death in all ovarian cancer cells...
to which it was
applied.
•Ginger has been shown to be an
effective remedy for the nausea
associated with motion sickness.
•Ginger has long been used as a natural heartburn remedy. It is most often taken in the form of
tea for this purpose.
•Ginger has long been used as a natural treatment for colds and the flu. Many people also find
ginger to be helpful in the case of
stomach flus or food poisoning, which is not surprising given the positive effects ginger has upon
the digestive tract.
•Research has shown that ginger
may provide migraine relief due
to its ability to stop
prostaglandins from causing pain
and inflammation in blood vessels.
•In Chinese medicine, ginger tea with brown sugar is used in the treatment of menstrual cramps.



10 Health Benefits of Ginger


1. Ovarian cancer treatment
2. Colon cancer prevention
3. Morning sickness relief
4. Motion sickness remedy
5. Reduces pain and inflammation
6. Heartburn relief
7. Prevention of diabetic & nephropathy
8. Migraine relief
9. Menstrual cramp relief
10. Cold and flu prevention.

HEALTH BENEFITS OF LEUCES ASPERA ತುಂಬಿ

Bhumika Gk
ತುಂಬಿ -LEUCES ASPERA
Latin : LEUCES ASPERA ,Telugu : Tummi (ತುಮ್ಮಿ,Malayaalam Tumba , kamala –Tumbi,Sanskrit -Drona pushpi
Hindi - ಗಮ ಮಧು ಪಟ್ಟಿ
ಇದು ಸಾಮಾನ್ಯ ಔಷಧ ಗಿಡವಾಗಿ ಎಲ್ಲರಿಗೂ ತಿಳಿದಿದೆ .ಇದು ಅನೇಕ ಆಕಸ್ಮಿಕಗಳಲ್ಲಿ ಬಹಳ ಉಪಕಾರಿ . ಇದು ೧-೨ ಅಡಿಎತ್ತರಕ್ಕೆ ಬೆಳೆಯುತ್ತದೆ. ಅಲ್ಲಲ್ಲಿ ಗಂಟುಗಳು ಇರುತ್ತವೆ.ಅಲ್ಲದೆ ಎಲೆಗಳು ೨" ಉದ್ದವಾಗಿರುತ್ತವೆ, ೧/೪ ಇಂಚು ಅಗಲವಿರುತ್ತದೆಇಲಿಗಳ ಕಿವಿಗಳಂತೆ ಇದರ ಹೂವುಗಳು ಕೆಳಗಡೆ ಇರುತ್ತದೆ.ಹೂ ಬಿಳುಪಾಗಿರುತ್ತದೆ , ಒಂದೇ ದಳ ಇರುತ್ತದೆ . .
ಗಿಡದ ಉಪಯೋಗ :
ಇದರ ಎಲೆಗಳನ್ನು ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತವೆ .ಇವುಗಲ್ಲನ್ನು ಅನೇಕಸಲ ರೀಚಕವಾಗಿ ಮತ್ತು ಅನೇಕಸಲ ವಾಂತಿ ಮಾಡಿಸಲಿಕ್ಕಾಗಿ ವಿಷಾಹಾರ ಸೇವಿಸಿದಾಗ ಉಪಯೋಗಿಸುತ್ತಾರೆ.ಕಸವನ್ನು ಹೊರಗೆ ಹಾಕುತ್ತದೆ.ಸಾಮಾ ನ್ಯವಾಗಿ ದೇಹದ ತಾಪಮಾನವನ್ನು ಕಾಪಾಡುತ್ತದೆ .ದೃಷ್ಟಿಯನ್ನು ವೃದ್ಧಿಸುತ್ತದೆ. ಹೆಂಗಸರಿಗೆ ಆಗುವ ರಕ್ತ ಸ್ರಾವವನ್ನು ಕಡಿಮೆ ಮಾಡುತ್ತದೆ .
ಎಲೆಗಳು ಎಲ್ಲಾ ವಿಷಕಾರಿ ಸಣ್ಣ ಕ್ರಿಮಿಗಳನ್ನು ನಾಶ ಮಾಡುತ್ತದೆ .
ಹಾವು ಕಚ್ಚಿದಾಗ ಇದರ ಉಪಯೋಗದಿಂದ ಗುಣ ಪಡೆಯಬಹುದು .
ಉಪಯೋಗಿಸುವ ವಿಧಾನ :
ಹಾವು ಕಚ್ಚಿದ ತಕ್ಷಣ ೩/೪ ರಿಂದ 1 OZ .ಇದರ ಎಲೆಗಳ ರಸವನ್ನು ಬಾಯಿ ಮೂಲಕ ಕೊಡಬೇಕು.ತಕ್ಷಣ ೨-೩ ಸಲ ಭೇದಿಯಾಗಿ ಮತ್ತು ವಾಂತಿಯಾಗಿ ಹೊಟ್ಟೆಯೊಳಗಿನ ವಿಷವನ್ನು ಹೊರ ಹಾಕುತ್ತದೆ . ಆಗ ನಿಧಾನವಾಗಿ ದೇಹದ ತಾಪಮಾನ ಮರಳಿ ಮಾಮೂಲು ಸ್ಥಿತಿಗೆ ಬರುತ್ತದೆ .
ಹಾವು ಕಚ್ಚಿದ ೩೦ ತಾಸುಗಳ ವರೆಗೆ ಹಾವು ಕಚ್ಚಿದವರು ಎಚ್ಚರದಿಂದ ಇರಬೇಕು .೨ ದಿವಸ ಹೆಸರು ಬೇಳೆ ಅಣ್ಣ ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ್ದನ್ನು ಕೊಡಬೇಕು.ಉಪ್ಪು , ಮೆಣಸಿನಕಾಯಿ , ಹುಳಿ,ಮೆಣಸಿನಖಾರ, ಹುಳಿ ಇತಾದಿಗಳನ್ನು ೩ನೆ ದಿನದಿಂದ ತೆಗೆದುಕೊಳ್ಳಬಹುದು .
೧.ಒಂದು ಪಕ್ಷ ರೋಗಿ ಎಚ್ಚರ ತಪ್ಪಿ (ಪ್ರಜ್ಞಾಶೂನ್ಯ ) ಬಿದ್ದರೆ , ಬಾಯಿಯಲ್ಲಿ ಬುರುಗು ಇತ್ಯಾದಿ ಬಂದರೆ ಕೆಲವು ಹನಿ ದ್ರೋಣ ಪುಷ್ಪಿ (ತುಂಬಿ) ಎಲೆಯ ರಸವನ್ನು ಮೂಗಿನ ಹೊಲ್ಲೆಯಲ್ಲಿ ಹಾಕಬೇಕು .ನಂತರ ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಬರುತ್ತದೆ .ನಂತರ 1oz (ಒಂದು ಔನ್ಸೆ) ರಸವನ್ನು ಬಯೋ ಮೂಲಕ ಕೊಡಿರಿ .ಅದರ ಎಲೆಗಳನ್ನು ಅರೆದು ಹಾವು ಕಚ್ಚಿದ ಜಾಗದಲ್ಲಿ ಹಚ್ಚಿರಿ (ಕಟ್ಟಿರಿ) .
೨.ಇದೆ ತರಹ ಚೇಳು ಕಚ್ಚಿದಾಗ ಅಥವಾ ಇನ್ನಾವುದೇ ಹುಳಗಳು ಕಚ್ಚಿದರೆ ಜೇನು ತುಪ್ಪದ ಜೊತೆ ಬಾಯಿ ಮೂಲಕ ಕೊಡಿರಿ ಮತ್ತು ಎಲೆಗಳನ್ನು ಅರೆದು ಕಚ್ಚಿದ ಜಾಗದಲ್ಲಿ ಹಚ್ಚಿರಿ.ಇದರಿಂದ ಕೂಡಲೇ ಗುಣ ಕಾಣಿಸುತ್ತದೆ .
೩.ಕಾಮಾಲೆ ರೋಗದಲ್ಲಿ (Jaundice) , ಎಚ್ಚರ ತಪ್ಪಿದಾಗ ಬಿಳಿ ಚಿಬ್ಬ್ಬಿನಲ್ಲಿ (White spots) , ತಲೆ ಸುತ್ತಿನಲ್ಲಿ ನೆಗಡಿಯಿಂದ ಮೂಗಿನಿಂದ ನೀರು ಇಳಿಯುತ್ತಿದರೆ , ತುಂಬಿ ರಸ (ಎಲೆಯಿಂದ) ಮೂಗಿಗೆ ಹಾಕಿದರೆ ಗುಣವಾಗುತ್ತದೆ.
೪. ತುಂಬಿ ಎಲೆ ಮತ್ತು ಉತ್ತರಾಣಿ ಎಲೆ (Dacmic extracts) ಎಲೆ ಸೇರಿಸಿ ಚೆನ್ನಾಗಿ ಅರೆದು . ಹಾಲಿನ (ಆಕಳ ಹಾಲಿನ) ಜೊತೆ ಬೆಳಗ್ಗೆ -ಸಾಯಂಕಾಲ ಹೆಣ್ಣು ಮಕ್ಕಳಿಗೆ ಮಾಸಿಕ ತೊಂದರೆ ಗಳಲ್ಲಿ (Irregulalr periods) ಹೆಚ್ಚು ರಕ್ತ ಸ್ರಾವವಗುತ್ತಿದರೆ ಇದರ ಸೇವನೆಯಿಂದ ತುಂಬಾ ಗುಣಕಾರಿಯಾಗುತ್ತದೆ.ಆದರೆ ಹುಳಿ , ಖಾರ ಇತ್ಯಾದಿಗಳನ್ನು ಬಿಡಬೇಕು
ಹೂಗಳ ಉಪಯೋಗ :
ತುಂಬಿ ಹೂಗಳ ರಸ ೪ ಹನಿಗಳು ಉತ್ತರಾಣಿ ಎಲೆಗಳ ರಸ ೨ ಹನಿ ಮತ್ತು ಮೆಣಸು ಪುಡಿ ೨ ಚಿಟಗಿ , ಜೇನು ತುಪ್ಪದ ಜೊತೆಗೆ ಮಕ್ಕಳಿಗೆ ಕೊಟ್ಟರೆ ಹೊಟ್ಟೆಯ ತೊಂದರೆಗಳು ಕಡಿಮೆಯಾಗುತ್ತದೆ .

HEALTH BENEFITS OF TURMERIC ಅರಿಶಿನ


ಸರ್ವಗುಣ ಸಂಪನ್ನ ಅರಿಶಿನ
ಅಡುಗೆಗೆ, ಸೌಂದರ್ಯವರ್ಧನೆಗೆ, ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗುವ ವಿಶೇಷತೆ ಅರಿಶಿನಕ್ಕೆ ಇದೆ. ಹರಿದ್ವರ್ಣವಿರುವುದರಿಂದ ಸಂಸ್ಕೃತದಲ್ಲಿ ಇದಕ್ಕೆ 'ಹರಿದ್ರಾ' ಎನ್ನುತ್ತಾರೆ. ಜೀರ್ಣಶಕ್ತಿ ಹೆಚ್ಚಳಕ್ಕೆ, ಮಧುಮೇಹ ಹತೋಟಿಗೆ, ಅಡುಗೆ ಹಾಗೂ ನಿಮ್ಮ ತ್ವಚೆಯ ಸೌಂದರ್ಯ ವರ್ಧನೆಗೆ ಅರಿಶಿನ ಬೇಕೇ ಬೇಕು.

ಎರಡು ಅಡಿ ಎತ್ತರದ ಅರಿಶಿನ ಗಿಡದ ಎಲೆಗಳು ಉದ್ದವಾಗಿ, ಅಗಲವಾಗಿರುತ್ತದೆ. ಹೂಗಳನ್ನು ಮಳೆಗಾಲದಲ್ಲಿ ನಿರೀಕ್ಷಿಸಬಹುದು. ದಕ್ಷಿಣ ಏಷ್ಯಾದಲ್ಲಿ ಅದರಲ್ಲೂ ದಕ್ಷಿಣ ಭಾರತದ ತಮಿಳುನಾಡಿನ ಈರೋಡು, ಅರಿಶಿನಕ್ಕೆ ಹೆಸರುವಾಸಿಯಾದ ನಗರ.

ಉಪಯೋಗಗಳು:
* ಅರಿಶಿನ ಪುಡಿಯನ್ನು ಎಳ್ಳೆಣ್ಣೆಯಲ್ಲಿ ಕಲೆಸಿ ಹೆಂಗಸರು ಮೈಗೆ ಹಚ್ಚಿ, ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ದುರ್ಗಂಧ, ನವೆ, ಎಗ್ಜಿಮಾ, ಚರ್ಮರೋಗಗಳ ನಿವಾರಣೆಯಾಗಿ ಕಾಂತಿ ವರ್ಧನೆಯಾಗುತ್ತದೆ.

* ಹಾಲಿನ ಕೆನೆಯೊಂದಿಗೆ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

* ಶ್ರೀಗಂಧ, ಅರಿಶಿನ ಹಾಗೂ ಪನ್ನೀರನ್ನು ಅರೆದು ಬರುವ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರಾಗುತ್ತವೆ.

* ಅರಿಶಿನ ಪುಡಿಯೊಂದಿಗೆ, ಬೇವಿನ ಎಲೆಯನ್ನು ಅರೆದು ಚರ್ಮಕ್ಕೆ ಹಚ್ಚುವುದರಿಂದ ಫಂಗಸ್(fungus) ಸೋಂಕು ನಿವಾರಣೆಯಾಗುತ್ತದೆ.

* ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.

* ಅರಿಶಿನ ಕಷಾಯವನ್ನು ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು.

* ಕಾಮಾಲೆ ರೋಗದವರಿಗೆ, ಬೆಳಗ್ಗೆ ಒಂದು ಬಟ್ಟಲು ಗಟ್ಟಿ ಮೊಸರಿನಲ್ಲಿ 10 ಗ್ರಾಂನಷ್ಟು ಅರಿಶಿನ ಪುಡಿಯನ್ನು ಬೆರೆಸಿ ಕೊಡುತ್ತ ಬಂದರೆ ಗುಣಮುಖವಾಗುತ್ತಾರೆ.

* ಬಿಸಿ ಹಾಲಿಗೆ ಚಿಟಿಕೆ ಅರಿಶಿನಪುಡಿ ಬೆರೆಸಿ ಕುಡಿದರೆ ಕೆಮ್ಮು, ನೆಗಡಿ ವಾಸಿಯಾಗುತ್ತದೆ.

ಇವೇ ಅಲ್ಲದೆ ಲ್ಯೂಕೆಮಿಯಾ, ಅಲ್ ಜೈಮರ್ , ಟ್ಯೂಮರ್ , ಕ್ಯಾನ್ಸರ್ ಮುಂತಾದ ಕಾಯಿಲೆ ಚಿಕಿತ್ಸೆಯಲ್ಲೂ ಅರಿಶಿನ ಸಹಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

HEALTH BENEFITS OF SUGAR CANE ಕಬ್ಬು

Gv Jayashree
ಕಬ್ಬಿನ ರಸವನ್ನು ಹೇರಳವಾಗಿ ಬಳಸ್ತಾರೆ ಭಾರತದಲ್ಲಿ. ಕಬ್ಬು ಸಾವಿರಾರು ವರ್ಷಗಳಿಂದ ಭಾರತೀಯರಿಗೆ ಪರಿಚಿತ.ಆಯುರ್ವೇದದಲ್ಲಿ ಕಬ್ಬಿನ ರಸ ತನ್ನದೇ ಆದ ಪ್ರಾಮುಖ್ಯತೆ ಪಡೆದು ಕೊಂಡಿದೆ. ಬೆಲ್ಲವನ್ನು ಸಹ ಅನೇಕ ಗಿಡಮೂಲಿಕೆಗಳನ್ನು ಬಳಸಿ ಉಪಯೋಗ ಮಾಡಲಾಗುತ್ತದೆ.ಇದರಲ್ಲಿ ಫಾಸ್ಫರಸ್ ,ಕ್ಯಾಲ್ಸಿಯಂ,ಕಬ್ಬಿಣಾಂಶ,ಮೆಗ್ನೀಷಿಯಂ,ಪೊಟಾಷಿಯಂ ಇದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದಕ್ಕಿದೆ.ಇದು ಪ್ರೊಸ್ಟೆಟ್ ಹಾಗೂ ಸ್ತನ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ.ಮೂತ್ರಕೋಶ, ಹೃದಯ, ಮೆದುಳು ಅಲ್ಲದ ಲೈಂಗಿಕ ಅವಯವಗಳು ಸುಗಮ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಮೈಯಲ್ಲಿ ಉರಿ ಉರಿ ಅನ್ನಿಸುತ್ತಿದ್ದರೆ,ಮೂತ್ರ ಮಾಡುವಾಗ ಉರಿ ಅನ್ನಿಸಿದರೆ, ಬೇಸಿಗೆಯ ಬಿಸಿಲ ಬೇಗೆಯಿಂದ ಬಳಲಿದ್ದರೆ ,ವಾತ-ಪಿತ್ತದ ದೇಹ ಪ್ರಕೃತಿ ಹೊಂದಿದ್ದರೆ ಈ ರಸವನ್ನು ಧಾರಾಳವಾಗಿ ಸೇವಿಸ ಬಹುದು.ಕಫ ದೋಷ ಹೊಂದಿರುವವರು ಸೇವಿಸದೆ ಇರುವುದು ಒಳಿತು .ವೈದ್ಯರುಉತ್ತಮ ಫಲಿತಾಂಶಕ್ಕಾಗಿ ಕಬ್ಬಿನ ರಸವನ್ನು ಮಧ್ಯಾನ ಕುಡಿಯಿರಿ ಎನ್ನುತ್ತಾರೆ .

Saturday, April 23, 2011

ಟೋಮೇಟೊ ರಾಯಿತ TOMATO RAITA

Bhumika Gk
ಟೋಮೇಟೊ ರಾಯಿತ
ಸಾಮಾಗ್ರಿ:
ಟೋಮೇಟೊ- 100 ಗ್ರಾಂ,ಇಂಗು- 1 ಚಿಟಿಕೆ,ಸಾಸಿವೆ-1/4 ಟೀ ಚಮಚ,ಮೊಸರು-1 ಕಪ್
ಉಪ್ಪು-1/4 ಟೀ ಚಮಚ,ಹಸಿಮೆಣಸು-4,ಕೊತ್ತಂಬರಿ ಸೊಪ್ಪು-1ಟೇಬಲ್ ಚಮಚ,ಎಣ್ಣೆ-1/2ಚಮಚ
ವಿಧಾನ:
ಟೋಮೇಟೊವನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ.ಎಣ್ಣೆಯನ್ನು ಕುದಿಸಿ ಅದಕ್ಕೆ ಸಾಸಿವೆಯನ್ನು ಹಾಕಿ ಹುರಿಯಿರಿ.
ಅದು ಒಡೆಯಲು ಶುರುವಾಗುವಾಗ ಹಸಿಮೆಣಸು ,ಇಂಗು ,ಉಪ್ಪನ್ನು ಸೇರಿಸಿ ಹಿತವಾಗಿ ಹುರಿಯಿರಿ.
ಇದಕ್ಕೆ ಟೊಮಟೋ ತುಂಡುಗಳನ್ನು ಹಾಕಿ ಎರಡು ನಿಮಿಶಗಳ ಕಾಲ ಹುರಿಯಿರಿ.ಇದನ್ನು ಒಲೆಯಿಂದ ತೆಗೆದು ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ.ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ

ಮಾವಿನಕಾಯಿ ಗೊಜ್ಜು MAVINAKAYI GOJJU ( MANGO)

Bhumika Gk
ಬೇಕಾಗುವ ಪದಾರ್ಥಗಳು
ಹಸಿರು ಮಾವಿನಕಾಯಿ ಹೆರಕಲು 1 ಕಪ್, ಬೇವಿನ ಹೂವುಗಳು 2 ಚಮಚ,ಬೆಲ್ಲ 3 ಚಮಚ
ಸಾಸಿವೆ ಕಾಳು ಅರ್ಧ ಚಮಚ ,ಉದ್ದಿನಬೇಳೆ, ಕಡಲೆಬೇಳೆ ಕಾಲು ಚಮಚ,ಹಸಿಮೆಣಸಿನಕಾಯಿ 2 ಅಥವಾ ಖಾರದ ಪುಡಿ,ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
* ಸ್ವಲ್ಪ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ಸಾಸಿವೆ, ಬೇಳೆಕಾಳು, ಮೆಣಸಿನಕಾಯಿ, ಇಂಗು ಹಾಕಿ ಎರಡು ನಿಮಿಷ ತಾಳಿಸಿ.
* ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಾವಿನಕಾಯಿ ಹೆರಕಲನ್ನು ಹಾಕಿ ಹತ್ತು ನಿಮಿಷದಷ್ಟು ಕುದಿಸಿಕೊಳ್ಳಿ.
* ಕುದಿಸಿಕೊಂಡ ಮಾವಿನಕಾಯಿಗೆ ಉಪ್ಪು, ಬೇವುಬೆಲ್ಲ ಹಾಕಿ ಮತ್ತೆ ಐದು ನಿಮಿಷಗಳ ಕಾಲ ಕುದಿಸಿರಿ.
* ಸೂಪರ್ ಸ್ಪೈಸಿ ಮಾವಿನಕಾಯಿ ಗೊಜ್ಜು ತಯಾರ್. ಸಿಹಿ ಜಾಸ್ತಿ ಬೇಕಿದ್ದರೆ ಒಂದು ಕರಣೆ ಬೆಲ್ಲ ಹೆಚ್ಚು ಹಾಕಿ. ಇದನ್ನು ಬಿಸಿಬಿಸಿ ಅನ್ನದ ಜೊತೆ ತುಪ್ಪ ಬೆರೆಸಿಕೊಂಡು ಹೊಟ್ಟೆಗಿಳಿಸಿ.

ಪುದೀನಾ ಚಟ್ನಿಪುಡಿ PUDINA CHUTNEY PUDI

Bhumika Gk
ಪುದೀನಾ ಚಟ್ನಿಪುಡಿ
ಬೇಕಾಗುವ ಪದಾರ್ಥಗಳು
ಎರಟು ಕಟ್ಟು ಪುದೀನಾ, ಒಂದು ಕಪ್ ಕಡಲೆಬೇಳೆ,ಒಂದು ಕಪ್ ಉದ್ದಿನಬೇಳೆ,ಒಂದು ಕಪ್ ಒಣಕೊಬ್ಬರಿ ತುರಿ
ಒಂದು ಕಪ್ ಕೆಂಪ್ ಮೆಣ್ಸಿನ್ ಕಾಯಿ,ರುಚಿಗೆ ತಕ್ಕಷ್ಟು ಉಪ್ಪ ,ರುಚಿಗೆ ತಕ್ಕಷ್ಟು ಹುಣಿಸೆಹಣ್ಣಿನ ಪೇಸ್ಟ್
ಸಣ್ಣ ತುಂಡು ಬೆಲ್ಲ ,ಇಷ್ಟ ಪಟ್ಟರೆ ಚಿಟಿಕೆ ಇಂಗು

ತಯಾರಿಸುವ ವಿಧಾನ

ಪುದೀನಾ ಸೊಪ್ಪಿನ ಎಲೆಗಳನ್ನು ಬಿಡಿಸಿ ಬಿಸಿಲಲ್ಲಿ ಇಡಬೇಕು. ಚೆನ್ನಾಗಿ ಒಣಗಿದ ಎಲೆಗಳು ನೋಡುವುದಕ್ಕೆ ಕಪ್ಪಾಗಿ ಕಂಡರೂ ಗರಿಗರಿಯಾಗಿರುತ್ತವೆ. ಬೇಳೆಗಳು, ಕೊಬ್ಬರಿ, ಮೆಣಸಿನಕಾಯಿಯನ್ನು ಚೂರು ಎಣ್ಣೆ ಹಾಕಿಕೊಂಡು ಒಂದೊಂದನ್ನೂ ಪ್ರತ್ಯೇಕವಾಗಿ (seperate) ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.

ಹುರಿದ ಪದಾರ್ಥಗಳನ್ನು ಒಂದೊಂದಾಗಿ ಮಿಕ್ಸಿಗೆ ಹಾಕುತ್ತಾ ಬರಬೇಕು. ಮೊದಲು ಕಡಲೆಬೇಳೆಯನ್ನು ಪುಡಿಮಾಡಿ ತಟ್ಟೆಗೆ ಹಾಕಿಕೊಳ್ಳಿ. ನಂತರ ಉದ್ದಿನಬೇಳೆ ಹಾಕಿ ರುಬ್ಬಿ ಸಣ್ಣಗೆ ಪುಡಿಯಾದ ನಂತರ ತೆಗೆದು ತಟ್ಟೆಗೆ ಹಾಕಿ. ಆನಂತರದಲ್ಲಿ ಮೆಣಸಿನಕಾಯಿ ಪ್ಲಸ್ ಉಪ್ಪು ಪ್ಲಸ್ ಹುಣಿಸೆ ಪೇಸ್ಟನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಮಿಕ್ಸಿಯಿಂದ ತೆಗೆದು ತಟ್ಟೆಗೆ ಹಾಕಿ.

ಕೊನೆಗೆ ಕೊಬ್ಬರಿ ಪ್ಲಸ್ ಪುದೀನಾ ಎಲೆಗಳನ್ನು ಹಾಕಿ ರುಬ್ಬಿಕೊಂಡು ಹೊರತೆಗೆಯಿರಿ. ಮೇಲೆ ಹೇಳಿದ ಯಾವುದೇ ಪದಾರ್ಥಗಳು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಹಿಟ್ಟಿನಂತಾಗಬಾರದು. ಅಂತಿಮವಾಗಿ ಎಲ್ಲಾ ಪದಾರ್ಥಗಳನ್ನು ಕೈಯಲ್ಲಿ ಅಥವಾ ಸೌಟಿನಲ್ಲಿ ಚೆನ್ನಾಗಿ ಕಲಸಿಡಬೇಕು. ಸ್ವಲ್ಪ ಬಾಯಿಗೆ ಹಾಕಿಕೊಂಡು ಉಪ್ಪು ಖಾರಾ ಪರೀಕ್ಷೆ ಮಾಡಿ. ಅಗತ್ಯ ಎನಿಸಿದರೆ ಉಪ್ಪು ಅಥವಾ ಬೆಲ್ಲ ಸೇರಿಸಿ ಮತ್ತೆ ಪುಡಿಮಾಡಿ ಬೆರೆಸಿರಿ.

ನಾನಾ ಬಗೆಯ ಸೊಪ್ಪಿನ ಎಲೆಗಳನ್ನು ಬಳಸಿ ಇದೇ ವಿಧಾನ ಅನುಸರಿಸಿ ಚಟ್ನಿಪುಡಿ ಮಾಡಬಹುದು. ಸಾಮಾನ್ಯವಾಗಿ ಕರಿಬೇವಿನ ಚಟ್ನಿಪುಡಿಯನ್ನು ಬಹಳಷ್ಟು ಜನ ಮಾಡುತ್ತಾರೆ. ನೀವು ಪುದೀನ ಅಥವಾ ಒಣಗಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಾಡಿಕೊಳ್ಳಬಹುದು

ಸೇಬು ಹಣ್ಣಿನ ಸಾರು ( APPLE SAMBAR)


ಬೇಕಾದ ಸಾಮಗ್ರಿಗಳು : ಸೇಬು ಹಣ್ಣು 2 | ಹಸಿ ಮೆಣಸಿನಕಾಯಿ 4ರಿಂದ 6 | ಉಪ್ಪು | ಬೆಲ್ಲ(ಬೇಕಿದ್ದರೆ)

ಒಗ್ಗರಣೆಗೆ : ಸಾಸಿವೆ, ಅರಿಷಿಣ, ಕರಿಬೇವು, ಇಂಗು, ಜೀರಿಗೆ, ಬೆಳ್ಳುಳ್ಳಿ ಪುಡಿ (ನಿಮ್ಮಿಷ್ಟ)

ತಯಾರಿಸುವ ವಿಧಾನ

ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಎಂಟು ಹೋಳಗಳನ್ನು ಮಾಡಿ, ಬೀಜ ತೆಗೆದು ಸ್ವಚ್ಛ ಮಾಡಿ ಮುಳುಗುವಷ್ಟು ನೀರಿನಲ್ಲಿ ಬೇಯಿಸಿರಿ. ಅರೆ ಬೆಂದನಂತರ ಹೊರತೆಗೆದು ಸಿಪ್ಪೆತೆಗೆದು ಒಂದು ಲೀಟರ್ ನೀರಿನಲ್ಲಿ ಹಾಕಿ ಮತ್ತೆ ಬೇಯಿಸಿರಿ.

ಕುದಿ ಬರುತ್ತಿದ್ದಂತೆ ಉಪ್ಪು, ಹಣ್ಣು ಹುಳಿಯಿದ್ದರೆ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ ಒಂದು ಬಾರಿ ಸೌಟಿನಿಂದ ಕದಡಿ.

ಸ್ಟೌವಿನ ಇನ್ನೊಂದು ಬದಿಯಲ್ಲಿ ಒಂದು ಬಾಣಲೆಯಲ್ಲಿ ಎರಡು ಚಮಚದಷ್ಟು ಎಣ್ಣೆ ಹಾಕಿ ಬಿಸಿ ಬಂದ ನಂತರ ಸಾಸಿವೆ ಹಾಕಿ ಚಟಪಟ ಅನಿಸಿ ಅರಿಷಿಣ, ಕರಿಬೇವು, ಹಸಿ ಮೆಣಸಿನಕಾಯಿ, ಇಂಗು, ಜೀರಿಗೆ ಹಾಕಿ ಸ್ವಲ್ಪ ತಾಳಿಸಿದ ನಂತರ ಕುದಿಯುತ್ತಿರುವ ಸೇಬಿನ ಸಾರಿಗೆ ಹಾಕಿ ಮತ್ತು ಹತ್ತು ನಿಮಿಷ ಕುದಿಯಲು ಬಿಡಿ.

ಸೇಬು ಹಣ್ಣಿ ಸಾರನ್ನು ಬಿಸಿಬಿಸಿ ಅನ್ನದೊಡನೆ ಕಲಿಸಿ ತಿನ್ನಬಹುದು. ಇದನ್ನು ಸೂಪಿನಂತೆ ಕುಡಿಯಲೂಬಹುದು. ಒಮ್ಮೆ ಟ್ರೈಮಾಡಿ.

Home remedies for Head ache & Dizziness ತಲೆ ಸುತ್ತು ಮತ್ತು ತಲೆ ನೊವ್ವು

* ಕೋಕಂ,ಪುರಂಪುಲಿ,ಮುರುಗಲ ಹಣ್ಣು ಎಂದೂ ಕರೆಯಲ್ಪಡುವ ಈ ಹಣ್ಣಿನ ರಸ ,ಸಾರು ಪಿತ್ತಕ್ಕೆ ದಿವ್ಯಔಷದ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿ ಯನ್ನು ದಿನಕ್ಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹ ದಿಂದ ಬರುವ ಎಲ್ಲಾ ತೊಂದರೆ ಶಮನ ಗೊಳ್ಳುತ್ತದೆ...

* ಹಳೆ ಹುಣಿಸೆ ಹಣ್ಣನ್ನು ರಾತ್ರಿ ನೀರಿಗೆ ಹಾಕಿಟ್ಟು, ಬೆಳಿಗ್ಗೆ ಅದನ್ನು ಕಿವುಚಿ ರಸ ತೆಗೆದು ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅರ್ಧ ಗಂಟೆಯ ನಂತರ ಬೇರೆ ಆಹಾರ ಸೇವಿಸಬಹು.

* ಇದು ತಲೆನೋವಿಗೆ ಪರಿಣಾಮಕಾರಿ ಮನೆ ಮದ್ದು.ನೀವು ಮಾಡಬೇಕಾದ್ದು ಇಷ್ಟೆ,ಲವಂಗ ಮತ್ತು ಹರಳುಪ್ಪು ಕುಟ್ಟಿ ಪುಡಿ ಮಾಡಿ,ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು ಕಡಿಮೆ ಮಾಡುತ್ತದೆ.

* ಒಂದು ಲೋಟದಲ್ಲಿ ಹದವಾದ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬುವನ್ನು ಬೆರೆಸಿ.ಇದನ್ನು ಕುಡಿದರೆ ನಿಮ್ಮ ತಲೆನೋವು ತಕ್ಷಣ ಕಡಿಮೆ ಆಗುತ್ತದೆ.ಕೆಲವರಿಗೆ ಗ್ಯಾಸ್ ಸಮಸ್ಯೆಯಿಂದ ಕೂಡ ತಲೆನೋವು ಬಂದಿರುತ್ತದೆ ಅಂತವರಿಗೆ ಇದು ಸಹಕಾರಿ.ಇದು ಗ್ಯಾಸ್ ಮತ್ತು ತಲೆನೋವು ಎರಡರಿಂದಲೂ ಮುಕ್ತಿ ನೀಡುತ್ತದೆ.

* ತಲೆನೋವನ್ನು ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವುದು.ಇದು ನೋವು ನಿವಾರಕವಾದ್ದರಿಂದ ಬೇಗ ತಲೆನೋವು ನಿವಾರಿಸುತ್ತದೆ

* ತಲೆನೋವನ್ನು ನಿವಾರಿಸಲು ಸುಲಭ ಉಪಾಯವೆಂದರೆ ದಾಲ್ಚಿನ್ನಿ ಪುಡಿಯನ್ನು ನೀರು ಬೇರೆಸಿ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.ಇದನ್ನು ಹಣೆಗೆ ಹಚ್ಚಿದರೆ ತಕ್ಷಣ ನೋವು ಕಡಿಮೆ ಆಗುತ್ತದೆ.

* ಕೊತ್ತಂಬರಿ,ಸಕ್ಕರೆ ಯನ್ನು ನೀರಿನೊಂದಿಗೆ ಬೆರೆಸಿ ಕುಡಿದರೆ ತಲೆನೋವಿನಿಂದ ಪರಿಹಾರ ದೊರಕುವುದು.ಸಾಮಾನ್ಯ ತಂಡಿಯಿಂದ ತಲೆನೋವು ಬಂದಿದ್ದರೆ ಈ ರೀತಿ ಮಾಡಿ ಕುಡಿಯುವುದರಿಂದ ಕಡಿಮೆ ಆಗುತ್ತದೆ.

* 15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.

* ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ.1 ಚಮಚದಷ್ಟು ರಸ ಕುಡಿಯಿರಿ.ಇದು ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ ಕಡಿಮೆ ಆಗುತ್ತದೆ.


* ಕೊತ್ತಂಬರಿ ಸೊಪ್ಪು ,ಜೀರಿಗೆ ಮತ್ತು ಶುಂಟಿ ಬೆರೆಸಿ ಮಾಡಿದ ಕಷಾಯ ಅಥವಾ ಟೀ ಕುಡಿಯುವುದರಿಂದ ತಲೆನೋವು ಸುಲಭವಾಗಿ ಮತ್ತು ಬೇಗ ಕಡಿಮೆ ಆಗುತ್ತದೆ.ಬಿಸಿ ನೀರಿಗೆ ಮೇಲೆ ಹೇಳಿದ ಪದಾರ್ಥ ಮಿಶ್ರಮಾಡಿ 5 ನಿಮಿಷಗಳವರೆಗೆ ಕುದಿಸಿ.ನಂತರ ಆ ನೀರನ್ನು ದಿನದಲ್ಲಿ ಎರಡು ಬಾರಿಯಾದರೂ ಕುಡಿಯಿರಿ.ನಿಮಗೆ ಉತ್ತಮ ಎನಿಸುವವರೆಗೂ ಕುಡಿಯುತ್ತಿರಿ.

* ಇಂಗನ್ನು  ತೆಂಗಿನ ಎಣ್ಣೆಯಲ್ಲಿ  ಅರೆದು  ಹಣೆಗೆ  ಹಚ್ಚಿದರೆ  ತಲೆನೋವ್ವು  ಕಡಿಮೆ  ಆಗುತ್ತದೆ. ಕೀಲು  ನೋವ್ವಿಗೂ ಇದನ್ನು  ಹಚ್ಚಿದರೆ  ನೋವ್ವು  ಕಡಿಮೆ  ಆಗುತ್ತದೆ.

* ಬಿಸಿಲಲ್ಲಿ  ತಿರುಗುವುದರಿಂದ  ಉಂಟಾಗುವ  ತಲೆನೋವ್ವಿಗೆ  ದ್ರಾಕ್ಷಿ  ಹಣ್ಣನ್ನು  ಸೇವಿಸುವುದು  R ಅದರ  ರಸವನ್ನು  ಸೇವಿಸುವುದು  ಪರಿಣಾಮಕಾರಿ.

* ನಿಂಬೆ ಹಣ್ಣಿನ  ಸಿಪ್ಪೆಯನ್ನು  ಸ್ವಲ್ಪ  ನೀರಿನಲ್ಲಿ  ನೆನೆಸಿ  ಅರೆದು  ಹಣೆಗೆ  ಹಚ್ಚುವುದರಿಂದ  ಅರೆತಲೆನೋವ್ವು  ಗುಣವಾಗುತ್ತದೆ.

* ದಿನವು  10-15 ಒಣದ್ರಾಕ್ಷಿಗಳನ್ನು  ತಿಂದು  ಹಾಲು  ಕುಡಿಯುವುದರಿಂದ  ದುರ್ಬಲತೆಯಿಂದ ತಲೆ  ತಿರುಗುವುದು  ನಿಲ್ಲುತ್ತದೆ. ಲೈಂಗಿಕ  ಶಕ್ತಿಯು  ವೃದ್ದಿಯಾಗುತ್ತದೆ .

* ನೆಲ್ಲಿಕಾಯಿಯ  ಶರಬತ್ತು  ಮಾಡಿ  ಕುಡಿಯುವುದರಿಂದ  ತಲೆ  ತಿರುಗುವುದು  ನಿಲ್ಲುತ್ತದೆ.

* ಹುಣಿಸೆ  ಹಣ್ಣಿನ  ಸಕ್ಕರೆ  ಪಾನಕ  ಕುಡಿದರೆ  ತಲೆನೋವ್ವು  ಪರಿಹಾರವಾಗುತ್ತದೆ.

* ಉಷ್ಣದಿಂದ ತಲೆನೋವ್ವು  ಉಂಟಾದರೆ  ಕಲ್ಲಂಗಡಿಯ ರಸವನ್ನು  ತೆಗೆದು  ಸ್ವಲ್ಪ  ಕಲ್ಲುಸಕ್ಕರೆ  ಹಾಕಿ  ಕುಡಿದರೆ  ಗುಣವಾಗುತ್ತದೆ.

* ರಾತ್ರಿ 5-6 ಹನಿ  ಬಾಧಾಮಿ   ತೈಲವನ್ನು  ಮೂಗಿಗೆ  ಹಾಕಿದರೆ  ತಲೆನೋವ್ವು  ಕಡಿಮೆ  ಆಗುತ್ತದೆ.

* ಸೇಬಿಗೆ ಸ್ವಲ್ಪ  ಉಪ್ಪು  ಹಚ್ಚಿ  ಸೇವಿಸಿದರೆ  ತಲೆನೋವ್ವು  ಕಡಿಮೆಯಾಗುತ್ತದೆ.

* ಏಲಕ್ಕಿ  ಚೂರ್ಣ  ಬೆರೆಸಿದ  ನಿಂಬೆ ಪಾನಕ   ಸೇವಿಸಿದರು  ತಲೆ  ತಿರುಗು  ನಿಲ್ಲುತ್ತದೆ.


dizziness.

 o Liquids: Liquids can help you treat this health problem completely. You need to drink plenty of waterand fresh fruit juices. But always avoid sugary drinks like colas and soft drinks.


 o Mustard and Salt: Mix salt, pepper, vinegar and mustard in equal proportions. Take it along with a glass full of water. This helps to increase the blood circulation and keeps you steady.

 o Lemon: Prepare a mixture of lemon extract, pinch of salt, black pepper and water and drink it to get rid of dizziness.

 o Apple Cider Vinegar: A mixture of honeyand some apple cider vinegar also work wonders in curing dizziness.

 o Yoghurt: Yoghurt is a great home remedy for dizziness. It will work even better, if mixed with the peels of some fruits.

 o Massage: Massages have relieving effects and can release tension and stress successfully. It improves the blood circulation in all parts of the body. A lavendermassage can definitely help you in dizziness.

 o Almonds and Pumpkin Seeds: Take about 3 tablespoons of wheat, 10-12 almonds and some pumpkin seeds and soak this mixture over night. Following day, grind them finely to make a paste. Now add some cloves to this paste. Boil the mixture with milk. You can add some sugar to taste. If consumed regularly for a few days, this home remedy can instantly provide relief in dizziness.

 o Amla: Amla is a great natural remedy for dizziness. You can soak amla and coriander for a night and then take it the following morning.




ಮುರುಗಲ ಹಣ್ಣು PUNAR PULI or BIRINDA (KOKUM)

ಕೋಕಂ,ಪುನರ್ಪುಳಿ,ಮುರುಗಲ ಹಣ್ಣು ಎಂದೂ ಕರೆಯಲ್ಪಡುವ ಈ ಹಣ್ಣಿನ ರಸ ,ಸಾರು ಪಿತ್ತಕ್ಕೆ ದಿವ್ಯಔಷದ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿ ಯನ್ನು ದಿನಕ್ಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹ ದಿಂದ ಬರುವ ಎಲ್ಲಾ ತೊಂದರೆ ಶಮನ ಗೊಳ್ಳುತ್ತದೆ..
ಆರೋಗ್ಯದ ದೃಷ್ಟಿಯಿಂದ ಮುರುಗಲು ಹಣ್ಣು ಮತ್ತು ಇದರ ಪಾನೀಯ ತುಂಬ ಪ್ರಯೋಜನಕಾರಿ.

ಕರಿ ಬೇವು KARI BEVU( Limda, Limdo, Limbda, Kari Patta, Karapincha)


ಬೇವಿನಷ್ಟು ಕಹಿಯಿಲ್ಲದಿದ್ದರೂ, ಬೇವಿನಂತೆ ವಿಶೇಷ ಗುಣವುಳ್ಳದ್ದರಿಂದ ಕರಿಬೇವಿಗೆ ಆ ಹೆಸರು ಬಂದಿದೆ. ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಒಂದು ಬಗೆಯ ಸೊಪ್ಪು. ಸ್ವಾದ್ವಿಷ್ಟವಿಲ್ಲದಿದ್ದರೂ, ಸುವಾಸನೆ ಭರಿತವಾದ ಸಸ್ಯ. ಸಂಸ್ಕೃತದಲ್ಲಿ ಇದಕ್ಕೆ ಕಾಲಶಾಕ ಎನ್ನುತ್ತಾರೆ.

ಕಫ, ಪಿತ್ತ, ಜಠರದ ರೋಗ, ರಕ್ತದೊತ್ತಡ, ಮಧುಮೇಹ, ಉದರ ಸಂಬಂಧ ಸಮಸ್ಯೆ, ಆಮಶಂಕೆ, ಮಲಬದ್ಧತೆ, ಭೇದಿ ನಿವಾರಣೆಗೆ ಕರಿಬೇವು ಸಹಕಾರಿ. ಟಿಬಿ, ಜಾಂಡೀಸ್ ಹಾಗೂ ಸರ್ಜರಿ ನಂತರ ದೇಹದ ಆರೋಗ್ಯ ಸಮತೋಲನ ಕಾಪಾಡಲು ಕರಿಬೇವು ಸೇವನೆ ಒಳ್ಳೆಯದು.

ಉಪಯೋಗಗಳು:
* 1-2 ಟೀ ಚಮಚದಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

* ಭೇದಿ, ಆಮಶಂಕೆ ನಿವಾರಣೆಗೆ ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡಬಹುದು. ಅಥವಾ ಚೆನ್ನಾಗಿ ಅರೆದ ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಬೆರೆಸಿ ನೀಡಿದರೆ ಉಪಯುಕ್ತ.

* ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

* ಕುರು, ಗಾಯವಾದಾಗ ಕರಿಬೇವಿನ ಎಲೆಗಳನ್ನು ಅರೆದು ಸ್ವಲ್ಪ ಅರಿಶಿನದೊಂದಿಗೆ ಬೆರೆಸಿ ಅರೆದು ಹಚ್ಚಬಹುದು.

* ಕಾಮಾಲೆ ರೋಗವಿದ್ದಾಗ 10-12 ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅರೆದುಕೊಂಡು ಸುಮಾರು 60-100ಮಿ.ಲೀ ಎಳನೀರಿನೊಂದಿಗೆ ನೀಡಬಹುದು.

* ಸೊಳ್ಳೆ, ಇರುವೆ, ನೊಣ ಮುಂತಾದ ಕೀಟಗಳ ತೊಂದರೆ ತಪ್ಪಿಸಲು ಕರಿಬೇವಿನ ಸುವಾಸನೆ ಸಾಕು.

* ಕರಿಬೇವಿನ ಎಲೆಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವ ಕಾರಣ, ಹಸಿ ಎಲೆಯನ್ನು ಅಗಿದು ತಿಂದರೆ ಒಳ್ಳೆಯದು.


*ಕಹಿ ಬೇವಿನ ಎಲೆ ಮತ್ತು ಕಸ್ತೂರಿ ಅರಿಶಿಣ 
ಕಹಿ ಬೇವಿನ ಎಲೆಯನ್ನು ಅರಿಶಿಣದ ಜೊತೆ ಹಾಕಿ ರುಬ್ಬಿ ಮುಖಕ್ಕೆ ಹಚ್ಚಿದರೆ ಅರಿಶಿಣ ಮುಖದಲ್ಲಿರುವ ನಂಜನ್ನು ಜೀರಿಕೊಳ್ಳುವುದರಿಂದ ಮೊಡವೆ ದೊಡ್ಡದಾಗುವುದಿಲ್ಲ, ಕಹಿ ಬೇವಿನ ಎಲೆ ಮೊಡವೆ ಏಳುವುದನ್ನು ತಡೆಯುತ್ತದೆ.

*ಕಹಿ ಬೇವಿನ ಎಲೆ ಮತ್ತು ನಿಂಬೆ ರಸ 

ಮೊಡವೆ ಕಡಿಮೆಯಾಗುತ್ತಾ ಬರುವಾಗ ಕಹಿ ಬೇವಿನ ಎಲೆಯ ಪೇಸ್ಟ್ ಗೆ ನಿಂಬೆ ರಸ ಹಿಂಡಿ ಮುಖಕ್ಕೆ ಹಚ್ಚಿದರೆ ಕಲೆಯೂ ಕಡಿಮೆಯಾಗುವುದು.

*ಕಹಿ ಬೇವಿನ ಎಲೆ, ಗಂಧ, ರೋಸ್ ವಾಟರ್ 

ಈ ಮೂರು ವಸ್ತುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖದಲ್ಲಿ ಮೊಡವೆ, ಅಲರ್ಜಿ ಯಾವುದೂ ಕಾಣಿಸಿಕೊಳ್ಳುವುದಿಲ್ಲ.

*ಕಹಿ ಬೇವಿನ ಸ್ಪ್ರೇ 

ಕಹಿ ಬೇವನ್ನು ರೊಸ್ ವಾಟರ್ ಹಾಕಿಟ್ಟ ನೀರಿಗೆ ಹಾಕಿ ಒಂದು ರಾತ್ರಿ ಇಟ್ಟು ಈ ನೀರನ್ನು ಮುಖಕ್ಕೆ ಚಿಮುಕಿಸಿ, ನಂತರ ಮೇಕಪ್ ಮಾಡುವುದರಿಂದ ಮೇಕಪ್ ನಿಂದ ತ್ವಚೆ ರಕ್ಷಣೆಯನ್ನು ಮಾಡಬಹುದು.

*ಕಡಲೆ ಹಿಟ್ಟು, ಮೊಸರು, ಕಹಿ ಬೇವಿನ ಎಲೆ 

ಈ ಮೂರನ್ನು ಮಿಶ್ರ ಮಾಡಿ ಇಡೀ ಮೈಗೆ ಹಚ್ಚುವುದರಿಂದ ಮೈ ಹೊಳಪು ಹೆಚ್ಚುವುದು.

* ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿ, ಆ ನೀರನ್ನು ಬಳಸುವುದು ಕೂಡ ಒಳ್ಳೆಯದು.


* ಅಕ್ಕಿಯನ್ನು ಇಡುವ ಜಾಗದಲ್ಲಿ ಬೇವಿನ ಎಲೆ ಇಟ್ಟರೆ ಅಲ್ಲಿ ಅಕ್ಕಿಯೂ ಹುಳ ಬರುವುದಿಲ್ಲ.


*ಬೇವಿನ ಎಲೆಗಳನ್ನು ಸುಟ್ಟು ಮನೆಗೆ ಹೋಗೆ ಆಡಿಸಿದರೆ ಸೊಳ್ಳೆಗಳು ಬರುವುದಿಲ್ಲ.

Friday, April 08, 2011

ವೈನ್ WINE

ವೈನ್ ಕುಡಿಯುವುದರಿಂದ ಆಗುವ ಅನುಕೂಲಗಳನ್ನು ಹೀಗೆ ಉದಾಹರಿಸಬಹುದು:
* ಕೊಲೆಸ್ಟ್ರಾಲ್ ನಿಯಂತ್ರಣ ಶಕ್ತಿ.
* ಹೃದಯ ಹಾಗೂ ಹಲ್ಲಿನ ಆರೋಗ್ಯ ಅನುಕೂಲ[ಇದು ಹೊಸ ಮದ್ಯಪಾನಿಗಳಿಗೆ ಅನ್ವಯವಾಗುವುದಿಲ್ಲ].
* ತ್ವಚೆ ಸಂರಕ್ಷಿಸಿ, ನಿಜ ವಯಸ್ಸನ್ನು ಮರೆ ಮಾಚುವಂತೆ ಮಾಡಬಹುದು.
* ಅಲ್ ಜೈಮೆರ್ ಕಾಯಿಲೆ ತೊಂದರೆ ಕಮ್ಮಿ ಮಾಡಬಹುದು.
* ಡಿಎನ್ಎ ತೊಂದರೆ ನಿಯಂತ್ರಣಕ್ಕೆ ಉಪಯೋಗ.

ಆದರೆ, ಹೆಚ್ಚಿನ ವೈನ್ ಸೇವನೆಯಿಂದ ಅಧಿಕ ರಕ್ತದೊತ್ತಡ, ಕರಳು ಬೇನೆ, ಕಿಡ್ನಿ ವೈಫಲ್ಯ, ನರ ದೌರ್ಬಲ್ಯ, ಕಾನ್ಸರ್ , ಹೃದಯಾಘಾತಕ್ಕೂ ಕಾರಣವಾಗುವುದುಂಟು.

ಟೈಪ್ 2 ಡಯಾಬಿಟಿಸ್ ರೋಗಿಗಳು ವೈನ್ ಸೇವಿಸುವುದು ಒಳ್ಳೆಯದು ಎಂದು ಇತ್ತೀಚೆಗೆ ತಜ್ಞ ವೈದ್ಯರು ಕಂಡುಕೊಂಡ ಸತ್ಯ. ವೈನ್ ಸೇವನೆ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ. ದೇಹಕ್ಕೆ ಅಗತ್ಯವಾದ ಗ್ಲುಕೋಸ್ ಒದಗಿಸಿ, ಇನ್ಸುಲಿನ್ ಚುಚ್ಚುಮದ್ದು ಮಾಡುವ ಕೆಲಸವನ್ನು ವೈನ್ ಮಾಡಿಬಿಡುತ್ತದೆ. ಆದರೆ, ಔಷಧಿ ರೂಪದಲ್ಲಿ ಸೇವಿಸಿದರೆ ಮಾತ್ರ ವೈನ್ ದೇಹಕ್ಕೂ ಮನಸಿಗೂ ಹಿತ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡುತ್ತಾರೆ.

HEALTH BENEFITS OF COCONUT ಎಳೆನೀರು

ಎಳೆನೀರು ಗಂಗೆಯ ಮತ್ತೊಂದು ರೂಪ ಎಂದು ನಬುವವರು ಸಾಕಷ್ಟು ಜನರಿದ್ದಾರೆ. ಸಿಕ್ಕಾಪಟ್ಟೆ ಬಾಯಾರಿಕೆ ಆದಾಗ ನೀರಿನ ಬದಲಾಗಿ ನೀರೆ ಕುಡಿಯಬೇಕು ಆಗಷ್ಟೇ ದಾಹ ತಣಿಯುವುದು. ಆದರೆ ನೀರಿನ ಬದಲಾಗಿ ಎಳೆನೀರನ್ನು ಸೇವಿಸಿದರೂ ಸಹ ಬಾಯಾರಿಕೆ ದೂರವಾಗುತ್ತದೆ.ಬೇಸಿಗೆಯಲ್ಲಿ ಬಾಯಾರಿಕೆ ತುಂಬಾ ಹೆಚ್ಚು. ಅದರಿಂದ ದೂರವಾಗಲು ತಂಪುಪಾನಿಯಗಳತ್ತ ಗಮನ ನೀಡದೆ ಎಳೆನೀರು ಕುಡಿಯಿರಿ ಎನ್ನುತ್ತಾರೆ ತಜ್ಞರು.
ಈ ನೀರಿನಲ್ಲಿ ಎಲೆಕ್ಟ್ರೋ ಲೈಟ್ಸ್ ಕ್ಯಾಲ್ಸಿಯಂ , ಪೊಟಾಷಿಯಂ,ಮೆಗ್ನಿಶಿಯಂ ನಂತಹ ಖನಿಜ ಲವಣಗಳಿವೆ.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ.ರೋಗಿಯು ತೈಪಾಯಿದ್, ಮಲೇರಿಯ ದಂತಹ ಜ್ವರಕ್ಕೆ ಈಡಾಗಿದ್ದಾರೆ ಎಳೆನೀರನ್ನು ಕುಡಿಸಲು ಸಲಹೆ ನೀಡುತ್ತಾರೆ ವೈದ್ಯರು. ಇದು ವಾಂತಿ ನಿರೋಧಕ. ಕಿಡ್ನಿಯಲ್ಲಿ ಕಲ್ಲು ಇರುವವರು ತಪ್ಪದೆ ಎಳೆ ನೀರು ಕುಡಿಯಿರಿ. ಅದು ಈ ಸಮಸ್ಯೆಯನ್ನು ದೂರಮಾಡುತ್ತದೆ.


* ಎಳೆನೀರು, ಅತಿಸಾರವನ್ನು ಕಡಿಮೆ ಮಾಡುವಲ್ಲಿ ತುಂಬಾ ಅನುಕೂಲಕರವಾಗಿದೆ. ಅಮೈನೊ ಆಮ್ಲಗಳು, ಕಿಣ್ವಗಳು, ಆಹಾರದ ಫೈಬರ್, ಸಿ ಜೀವಸತ್ವ ಮತ್ತು ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಮ್ಯಾಂಗನೀಸ್ ಖನಿಜಗಳು ಎಳನೀರಿನಲ್ಲಿ ಸಮೃದ್ಧವಾಗಿದೆ. ಜೊತೆಗೆ ಇದು ಕೊಲೆಸ್ಟ್ರಾಲ್ ಮತ್ತು ಕ್ಲೋರೈಡ್ ರಹಿತ ಪಾನೀಯ ಕೂಡ.

* ತೆಂಗಿನಕಾಯಿಯ ನೀರು ಪೊಟ್ಯಾಷಿಯಂ ಅನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದೆ, ಆದ್ದರಿಂದ ಇದು ದೇಹದ ದ್ರವಗಳಿಗೆ ಎಲೆಕ್ಟ್ರೋಲೈಟ್ ಸಂಯೋಜನೆಯನ್ನು ನೀಡುತ್ತದೆ.

* ತೆಂಗಿನಕಾಯಿ ನೀರು ದೇಹದಲ್ಲಿ ಯಶಸ್ವಿಯಾಗಿ ಅಭಿದಮನಿಯ ಸಂಚಲನ ನಡೆಯುವಂತೆ ಮಾಡುತ್ತದೆ. ದೂರದ ಪ್ರದೇಶಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲದಿರುವ ಸ್ಥಳದಲ್ಲೂ ರೋಗಿಯೊಬ್ಬನ ಜೀವ ಉಳಿಸುವ ಶಕ್ತಿ ನೈಸರ್ಗಿಕವಾದ ಎಳನೀರಿಗಿದೆ. ಎಳನೀರಿನಲ್ಲಿ ಕೊಬ್ಬಿನಂಶ ಅತ್ಯಂತ ಕಡಿಮೆಯಿರುವುದರಿಂದ ತೂಕ ಇಳಿಸಲು ಸಹಾಯಕವಾಗುತ್ತದೆ. ಇದು ಇತರ ಆಹಾರದ ಕಡುಬಯಕೆಗಳನ್ನು ಕಡಿಮೆ ಮಾಡಿ ಪರಿಪೂರ್ಣ ಭಾವನೆ ಹೊಂದಲು ಸಹಾಯಮಾಡುತ್ತದೆ.

* ಎಳನೀರು ಮಧುಮೇಹಿಗಳಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

* ಯಾವುದೇ ವ್ಯಕ್ತಿ ಜ್ವರ ಪೀಡಿತವಾಗಿದ್ದರೆ, ವೈರಸ್ ಗಳು ದೇಹವನ್ನು ಆಕ್ರಮಿಸಿದ್ದರೆ ತೆಂಗಿನ ನೀರು ಬಹಳ ಅನುಕೂಲಕರ.

* ಇದು ಪೊಟ್ಯಾಷಿಯಂ ಅಂಶವನ್ನು ಸಮೃದ್ಧವಾಗಿ ಹೊಂದಿರುವ ಎಳನೀರು ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಇದು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಂಥ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಎಳನೀರಿನಲ್ಲಿರುವ ಖನಿಜಗಳು, ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಅಂಶಗಳ ಕಾರಣ ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಬಹುಮಟ್ಟಿಗೆ ತಡೆಯುತ್ತದೆ.

* ತೆಂಗಿನಕಾಯಿ ನೀರನ್ನು ಮೊಡವೆ, ಕಲೆಗಳು, ಸುಕ್ಕುಗಳು, ಸೆಲ್ಯುಲೈಟ್ ಮತ್ತು ಎಸ್ಜಿಮಾ ಜಾಗಗಳಿಗೆ ನಿರಂತರವಾಗಿ ಎರಡರಿಂದ ಮೂರು ವಾರಗಳ ಕಾಲ ರಾತ್ರಿ ಹಚ್ಚಿ ಮಲಗಿದರೆ ತ್ವಚೆ ಸ್ವಚ್ಛವಾಗುತ್ತದೆ. ಹಾಗೂ ಕಾಂತಿಯುತವಾಗುತ್ತದೆ.
ಕೆಲವು ಸಂಶೋಧಕರು, ಎಳನೀರು ಸೈಟೋಕೈನಿನ್ ನ್ನು ಹೊಂದಿದ್ದು, ಇಳೆ ವಯಸ್ಸಿನಲ್ಲಿ ಮುಪ್ಪು ಉಂಟಾಗುವುದು, ಕ್ಯಾನ್ಸರ್ ಮತ್ತು ಥ್ರಂಬೋಟಿಕ್ ಪರಿಣಾಮಗಳನ್ನು ಪ್ರಯೋಜನಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉದಾಹರಣೆಗೆ ಸೆಲೆನಿಯಮ್ ಕಾಂಪೌಂಡ್ಸ್ ಹೊಂದಿರುವ ಎಳನೀರು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ.

*ಹಲವಾರು ಪ್ರಾಣಿ ಅಧ್ಯಯನಗಳು, ಹೇಳುವಂತೆ ತೆಂಗಿನ ನೀರು ಕಡಿಮೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡಬಹುದು ಎಂದು ಹೇಳಿವೆ. ಇತರ ಪಾನೀಯಗಳಿಗೆ ಹೋಲಿಸಿದರೆ ಎಳೆನೀರು ಅತ್ಯಂತ ಆರೋಗ್ಯಕರ ಆಯ್ಕೆ ಎನ್ನುವುದು ಅಕ್ಷರಶಃ ಸತ್ಯ.

* ತೆಂಗಿನಕಾಯಿ ನೀರಿನಲ್ಲಿರುವ ಆಮ್ಲ ಫಾಸ್ಫೇಟ್, ಅನೇಕ ನೈಸರ್ಗಿಕ ಜೈವಿಕಕ್ರಿಯಾಶೀಲ ಕಿಣ್ವಗಳು. ಕ್ರಿಯಾವರ್ಧಕ, ಡಿಹೈಡ್ರೋಜಿನೇಸ್, ಡಯಸ್ಟೇಟ್, ಪೆರಾಕ್ಸಿಡೇಸ್, ಆರ್ ಎನ್ ಎ-ಪಾಲಿಮರೇಸ್ ಇತ್ಯಾದಿ ಪರಿಣಾಮ ಕಿಣ್ವಗಳು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ.

* ಬಹಳ ಕಡಿಮೆ ಸಾಂದ್ರತೆಯ ಹೊರತಾಗಿಯೂ, ಕಿತ್ತಳೆ ಮುಂತಾದ ಹಣ್ಣುಗಳಲ್ಲಿರುವುದಕ್ಕಿಂತ ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಷಿಯಂ, ಮತ್ತು ಜಿಂಕ್ ರೀತಿಯ ಖನಿಜಗಳ ಉತ್ತಮ ಸಂಯೋಜನೆ ಹೊಂದಿದೆ.

* ಎಳನೀರು ಬಿ-ಕಾಂಪ್ಲೆಕ್ಸ್ ಜೀವಸತ್ವಗಳಾದ ನಿಯಾಸಿನ್, ಥಯಮಿನ್, ಪಿರಿಡಾಕ್ಸಿನ್ ಮೊದಲಾದವುಗಳ ಉತ್ತಮ ಮೂಲವಾಗಿದೆ. ಈ ಜೀವಸತ್ವಗಳು ಮಾನವ ದೇಹಕ್ಕೆ ಅತ್ಯಂತ ಅಗತ್ಯವಿರುವಂಥಹವು.

* ತೆಂಗಿನಕಾಯಿ ನೀರು ಎಲೆಕ್ಟ್ರೋಲಟ್ ಪೊಟ್ಯಾಷಿಯಂನ ಉತ್ತಮ ಪ್ರಮಾಣವನ್ನು ಹೊಂದಿದೆ. ಎಳನೀರಿನ 100 ಮಿಲಿ ನೀರು 250 ಮಿಗ್ರಾಂ ಪೊಟ್ಯಾಷಿಯಂ ಮತ್ತು 105 ಮಿಗ್ರಾಂ ಸೋಡಿಯಂ ಅಂಶಗಳನ್ನು ಹೊಂದಿದೆ. ಈ ಇಲೆಕ್ಟ್ರೊಲೈಟ್ಸ್ ಅಂಶಗಳು ಅತಿಸಾರದಂಥಹ ಸಮಸ್ಯೆಯನ್ನು ತಡೆಯುತ್ತವೆ.


* ಇದಲ್ಲದೆ, ತಾಜಾ ತೆಂಗಿನ ನೀರು ವಿಟಮಿನ್ ಸಿ (ಆಸ್ಕೋರ್ಬಿಕ್ ಆಮ್ಲ) ಯ ಒಂದು ಸಣ್ಣ ಪ್ರಮಾಣವನ್ನು ಹೊಂದಿದೆ. ಇದು 2.4 ಮಿಗ್ರಾಂ ಅಥವಾ ಶೇ 4. ಆರ್ ಡಿ ಎ ಪ್ರಮಾಣವನ್ನು ಒದಗಿಸುತ್ತದೆ.