Monday, March 12, 2012

HEALTH BENEFITS OF BILVA PATHRE ಬಿಲ್ವ ಪತ್ರೆ




ಬಿಲ್ವದ ಔಷಧೀಯ ಗುಣಗಳು:
ಬಿಲ್ವ ಮರದಲ್ಲಿನ ಬೇರು, ತೊಗಟೆ, ಪತ್ರೆ, ಹೂ, ಕಾಯಿ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿರುತ್ತದೆ. ಇದು ವಾತಹರ, ಅತಿಸಾರ, ಜ್ವರ, ಮೂತ್ರ ಸಂಬಂಧಿತ ರೋಗಗಳಿಗೆ ಸಿದ್ಧೌಷಧಿ. ಉಷ್ಣಗುಣ ಹೊಂದಿದ ಈ ಹಣ್ಣು ಜೀರ್ಣಕ್ರಿಯೆ ಮತ್ತು ಹಸಿವು ಹೆಚ್ಚು ಮಾಡುತ್ತದೆ…. ರಕ್ತಭೇದಿ, ಹೊಟ್ಟೆ ನೋವು ಉಪಶಮನ –  ಹೀಗೆ ದೇಹದ ಒಳ ಮತ್ತು ಬಾಹ್ಯ ರೋಗಕ್ಕೆ ಮದ್ದಾಗಿ ಬಳಸುತ್ತಾರೆ. ಒಸಡಿನಲ್ಲಿನ ರಕ್ತಶ್ರಾವ. ಕೆಮ್ಮು, ನೆಗಡಿ, ಹೊಟ್ಟೆಯ ತೊಂದರೆಗಳು, ಗರ್ಭಿಣಿಯರಲ್ಲಾಗುವ ವಾಕರಿಕೆಗಳಿಗೆ ಬಿಲ್ವ ಹಣ್ಣು ಬಹಳಷ್ಟು ಔಷಧಿಯ ಗುಣವನ್ನು ಹೊಂದಿದೆ. ಬಿಲ್ವದ ಹಣ್ಣಿನಿಂದ ಪಾನಕವನ್ನು ಮಾಡಿ ಕುಡಿಯುತ್ತಾರೆ, ಇದು ಬೊಜ್ಜು ಕರೆಗಿಸುತ್ತದೆ, ಕಿವುಡುತನ, ಕಣ್ಣಿನ ಕಾಯಿಲೆಗಳು, ಹೀಗೆ ಎಲ್ಲಾ ರೋಗಕ್ಕೂ ಔಷಧಿಯ ರೀತಿ ಬಳಸುತ್ತಾರೆ.
ಸಕ್ಕರೆ ರೋಗಕ್ಕೆ ರಾಮ ಬಾಣವಿದ್ದಂತೆ. ರಕ್ತದಲ್ಲಿ ಸಕ್ಕರೆ ಕಾಯಿಲೆ ಇದ್ದು ಬಿಲ್ವದ ಎಲೆ ದಿನಕ್ಕೊಂದು ಸೇವಿಸುವುದು ಅಥವಾ  ಬಿಲ್ವದ ಹಣ್ಣಿನ ಪಾನಕ (ಸಕ್ಕರೆ ಹಾಕದೇ) ಕುಡಿಯುತ್ತ ಬಂದರೆ ಖಂಡಿತಾ ಸಕ್ಕರೆ ರೋಗ ಉಪಶಮನವಾಗುತ್ತದೆ.
ಬಿಲ್ವದ ಎಲೆ, ಕಾಯಿ, ಬೇರು ಈ ಮೂರು ಅಂಗಗಳನ್ನು ಔಷಧಕ್ಕಾಗಿ ಹೆಚ್ಚು ಬಳಸುತ್ತಾರೆ. ಎಲೆಗಳನ್ನು ಅರೆದು ಮುದ್ದೆ ಮಾಡಿ, ಇಲ್ಲವೆ ರಸ ತೆಗೆದು, ಅಥವಾ ಒಣಗಿಸಿ ಪುಡಿ ಮಾಡಿ ಉಪಯೋಗಿಸುತ್ತಾರೆ. ಬೇರನ್ನು ಪುಡಿ ಮಾಡಿ ಅಥವಾ ತೇಯ್ದು ಉಪಯೋಗಿಸುತ್ತಾರೆ. ಕಾಯಿಯ ಒಳಗಿನ ತಿರುಳನ್ನು ಒಣಗಿಸಿ ಪುಡಿ ಮಾಡಿ, ಇಲ್ಲವೆ ಕಷಾಯ ಮಾಡಿ ಉಪಯೋಗಿಸಲಾಗುತ್ತದೆ. ಬಿಲ್ವವವು ಹೃದಯಕ್ಕೆ ಬಲ ನೀಡುತ್ತೆಂದೂ ಸಹ ಹೇಳುತ್ತಾರೆ.
 ಬಿಲ್ವವೃಕ್ಷದ “ಬೇರಿನ ಮತ್ತು ಮರದ ನಡುವಿನ ತಿರುಳಿನ ಭಸ್ಮದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಲೋಹ, ರಂಜಕ, ಸಿಲಿಕಾಗಳು” ಇರುತ್ತವೆ.
ಬಿಲ್ವ ಎಷ್ಟು ಉಪಯೋಗ ಅಲ್ವಾ:
೧. ಬಿಲ್ವದ ತೈಲ ಇದನ್ನು ೪ ಅಥವಾ ಐದು ಡ್ರಾಪ್ ಕಿವಿಗೆ ಬಿಡುವುದರಿಂದ ಕಿವುಡುತನ ಉಪಶಮನವಾಗುತ್ತದೆ.
೨. ಸುಮಾರು ೧೦ ಗ್ರಾಂ ಬಿಲ್ವದ ಲೇಹ ಸೇವಿಸುವುದರಿಂದ ಗ್ಯಾಸ್ಟ್ರಿಕ್ ತೊಂದರೆ ನಿವಾರಣೆಯಾಗುತ್ತದೆ.
೩. ೫ ಚಮಚ ಕಷಾಯ ಕುಡಿದರೆ ಜ್ವರ, ಗಂಟಲು ನೋವು ನಿವಾರಣೆಯಾಗುತ್ತದೆ.
೪. ೧೦ ಗ್ರಾಂ ಬಿಲ್ವದ ಚೂರ್ಣ ಸೇವಿಸಿದರೆ ಭೇದಿ ಮತ್ತು ಹೊಟ್ಟೆ ನೋವು ಶಮನವಾಗುತ್ತದೆ.
೫. ಬಿಲ್ವದ ಎಲೆಗಳನ್ನು ನೀರು ಮಿಶ್ರಿತದಿಂದ ಅರೆದು ಕಣ್ಣುಗಳ ರೆಪ್ಪೆಯ ಮೇಲೆ ಲೇಪನ ಮಾಡಿದರೆ ಒಳ್ಳೆಯ ಪರಿಣಾಮ ನೀಡುತ್ತದೆ.
೬. ಬೇವಿನ ಮರದ ಚಕ್ಕೆ ಮತ್ತು ಬಿಲ್ವದ ಮರದ ಚಕ್ಕೆ ಎರಡೂ ಸಮಪ್ರಮಾಣದಲ್ಲಿ ಜಜ್ಜಿ ನೀರಿಗೆ ಹಾಕಿ ಕಷಾಯ ಮಾಡಿ ಹಾಲಿನ ಜೊತೆ ಕುಡಿದರೆ ಪಿತ್ತ, ಹುಳಿತೇಗು, ಹೊಟ್ಟೆನೋವು, ಹೊಟ್ಟೆ ಉಬ್ಬರ ಇವೆಲ್ಲವೂ ಕಡಿಮೆಯಾಗುತ್ತವೆ.
  – ಬಿಲ್ವ ಮರದ ತೈಲ, ಬೇರಿನ ಪುಡಿ, ಲೇಹ ಇವುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಕಷ್ಟ ಆದರೆ ಇಂತಹವು ಹೆಚ್ಚು ಗ್ರಂಧಿಗೆ ಅಂಗಡಿಗಳಲ್ಲಿ ಹೆಚ್ಚು ದೊರೆಯುತ್ತವೆ.



ಹೆಸರು ಪ್ರಮಾಣ ಉಪಯೋಗ
ಬಿಲ್ವ ತೈಲ ೪-೪ಬಿಂದುಕಿವಿಗೆ ಕಿವಿನೋವು, ಕಿವುಡು
ಬಿಲ್ವಾದಿ ಚೂರ್ಣ ೧೦ಗ್ರಾಂ ಭೇದಿ ಹೊಟ್ಟೆನೋವು
ಬಿಲ್ವಾಸವ ೪ ಚಮಚ ಕೀಲುಗಂಟು ನೋವು, ಭೇದಿ
ದಶಮೂಲಾರಿಷ್ಟ ೪ ಚಮಚ ಟಾನಿಕ್ಕು ರೋಗ ನಿರೋಧಿ
ದಶಮೂಲ ಕಷಾಯ ೪ ಚಮಚ ಜ್ವರ, ಗಂಟಲು ನೋವು
ಬಿಲ್ವಾದ್ಯವ ಲೇಹ ೧೦ ಗ್ರಾಂ ಹಳೆಭೇದಿ, ಗ್ಯಾಸ್ಟ್ರಿಕ್ ಕಾಯಿಲೆ
ನೇತ್ರರೋಗದಲ್ಲಿ : ಬಿಲ್ವದ ಹಸಿರೆಲೆಗಳನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಕಣ್ಣುಗಳ ಮೇಲೆ ಪಟ್ಟಿ ಹಾಕಬೇಕು. ಗುಣಕಾರಿ ಪರಿಣಾಮ ಸಿಗುತ್ತದೆ
ಹುಳಿತೇಗು, ಹೊಟ್ಟೆನೋವು, ಹೊಟ್ಟೆ ಉಬ್ಬರ : ಬೇವಿನ ಮರದ ಚಕ್ಕೆ ಮತ್ತು ಬಿಲ್ವ ಮರದ ಚಕ್ಕೆ ಸಮಭಾಗವಾಗಿ ತೆಗೆದು, ಚೆನ್ನಾಗಿ ಜಜ್ಜಿ ನೀರು ಹಾಕಿ, ಕಷಾಯ ಮಾಡಿ, ಹಾಲು, ಸಕ್ಕರೆ ಸೇರಿಸಿ ಕುಡಿಯಬೇಕು. ಪಿತ್ತ ಸಂಬಂಧಿತ ತೊಂದರೆಗಳು ಕಡಿಮೆ ಆಗುತ್ತವೆ.

HEALTH BENIFITS OF ARKA (EKKA) ಎಕ್ಕಡ ಗಿಡ (ಅರ್ಕ)




ಈ ಗಿಡದ ಬೇರು, ತೊಗಟೆ, ಎಲೆ, ಹೂ ಮತ್ತು ಅದರಲ್ಲಿರುವ ಲೇಟೆಕ್ಸ್ ಹಾಲನ್ನು ಔಷಧಿಗಳಿಗೆ ಬಳಸುತ್ತಾರೆ: 


ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ. ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ. - ಇದು ನನ್ನ ಸ್ವಂತ ಅನುಭವ.
ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ  ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ.
ಎಕ್ಕದ ಬೇರಿನೊಂದಿಗೆ ನಿಂಬೆರಸ ಮಿಶ್ರಣಮಾಡಿ ಅರೆದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
ಪುಡಿಮಾಡಿದ ಒಣಗಿದ ಎಕ್ಕದ ತೊಗಟೆಯನ್ನು  ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು, ನೆಗಡಿ, ಕಫ ಕಡಿಮೆಯಾಗುತ್ತದೆ.
ಚೇಳುಕಡಿತಕ್ಕೂ ಎಕ್ಕದ ಬೇರನ್ನು ಔಷಧಿಯಾಗಿ ಬಳಸುತ್ತಾರೆಂದು ಕೇಳಿದ್ದೇನೆ.
ಮುಖದಲ್ಲಿ ಬಂಗು, ಅಜೀರ್ಣ, ಮಹಿಳೆಯ ಋತುಚಕ್ರ ತೊಂದರೆಗಳಿಗೆ, ಗಾಯ, ಮೂಲವ್ಯಾದಿ, ಹಲ್ಲು ನೋವಿಗೆ ಹೀಗೆ ಅನೇಕ ತೊಂದರೆಗಳಿಗೆ ಎಕ್ಕದ ಹಲವು ಭಾಗಗಳನ್ನು ಔಷಧಿಯಾಗಿ ಬಳಸುತ್ತಾರೆ. 
* ಎಕ್ಕದ ಹೂ 5 ತೊಲ, ತಿನ್ನುವ ಉಪ್ಪು 5 ತೊಲ ಈ
ಎರಡನ್ನೂ ಶರಾವೆಯಲ್ಲಿಟ್ಟು ಸೀಲುಮಾಡಿ 10-15 ಕುಳ್ಳಿನಲ್ಲಿ
ಪುಟವಿಟ್ಟರೆ ಭಸ್ಮವಾಗುತ್ತದೆ. ಇದೇ ಅರ್ಕಭಸ್ಮ. (ಇದನ್ನು
ಬಾಂಡಲೆಯಲ್ಲಿ ಹಾಕಿ ಹುರಿದು ಭಸ್ಮಮಾಡುತ್ತಾರೆ). ಈ ಅರ್ಕ ಲವಣ
5 ಗುಂಜಿಯನ್ನು ನಿತ್ಯ ಬಿಸಿನೀರಿನಲ್ಲಿ 10 ನಿಮಿಷಕ್ಕೊಮ್ಮೆ 3 ಬಾರಿ
ಕೊಟ್ಟರೆ ದಮ್ಮು ಪರಿಹಾರ. ಇದನ್ನೇ ದಿನಕ್ಕೆ 2 ಬಾರಿ 1-2 ಗುಂಜಿಯನ್ನು
ಜೇನಿನಲ್ಲಿ ಅಥವಾ ತುಪ್ಪದಲ್ಲಿ ಸೇವಿಸಿದರೆ ಹಳೆಯ ದಮ್ಮು ಪರಿಹಾರ.


* ಜ್ವರ ಮತ್ತು ಕಫಯುಕ್ತ ಕೆಮ್ಮು ದಮ್ಮು: ಎಕ್ಕದ ಬೇರಿನ
ತೊಗಟೆಯ ಚೂರ್ಣ, ಸಮಭಾಗ ಜೇಷ್ಠಮಧು ಚೂರ್ಣ ಸೇರಿಸಿಟ್ಟುಕೊಂಡು
ಈ ಚೂರ್ಣ 8 ಗುಂಜಿಯನ್ನು ದಿನಕ್ಕೆ 2 ವೇಳೆ ಜೇನಿನಲ್ಲಿ 2-3 ವಾರ
ಸೇವಿಸುವುದರಿಂದ ಉಬ್ಬಸ ಪರಿಹಾರವಾಗುತ್ತದೆ.
 * ಎಕ್ಕದ ಎಲೆ ತಾನಾಗಿಯೇ ಹಣ್ಣಾಗಿ ಬಿದ್ದುದನ್ನು ನೆರಳಲ್ಲಿ
ಒಣಗಿಸಿ ಸುಟ್ಟು ಬೂದಿಮಾಡಿ ವಯೋಮಾನಕ್ಕೆ ತಕ್ಕಂತೆ 2 ರಿಂದ
6 ಗುಂಜಿಯವರೆಗೆ ದಿನಕ್ಕೆರಡು ಬಾರಿ ಜೇನಿನಲ್ಲಿ ಕೊಡುತ್ತಿದ್ದರೆ ಅಪಸ್ಮಾರ
ಪರಿಹಾರವಾಗುತ್ತದೆ.


 * ಎಕ್ಕದ ಎಲೆಯನ್ನು ಬಿಸಿಮಾಡಿ ನೋವಿರುವ ಜಾಗಕ್ಕೆ ಶಾಖ
ಕೊಡುತ್ತಿದ್ದರೆ ವಾಯುಶೂಲೆ ಪರಿಹಾರವಾಗುತ್ತದೆ.